ಅನುದಿನ ಕವನ-೧೫೦೧, ಹಿರಿಯ ಕವಿ:ಡಾ. ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ:ಶ್ವಾನಾಕ್ರೋಶ

ಶ್ವಾನಾಕ್ರೋಶ

ತಿದ್ದಲಾಗದ
ನಿಮ್ಮ,
ಉದ್ದುದ್ದ
ಡೊಂಕುಗಳ,
ನನ್ನ ಬಾಲಕ್ಕೇಕೆ
ಹೋಲಿಸುವಿರಿ;
ನನ್ನದೋ
ಕಾಯಗುಣ,
ನಿಮ್ಮದು
ಭ್ರಷ್ಟಮನ,
ಎಲ್ಲಿಂದ ಸಂಬಂಧ
ಕಲ್ಪಿಸುವಿರಿ?


-ಡಾ.ಬಸವರಾಜ ಸಾದರ, ಬೆಂಗಳೂರು